ರತ್ನಮಾಲಾ ಧಾರೇಶ್ವರ ಸವಣೂರು (ಕೆಲವೊಮ್ಮೆ ಸವಣೂರು ಎಂದು ಉಚ್ಚರಿಸಲಾಗುತ್ತದೆ; ಜನನ ೧೯೫೦) ಒಬ್ಬ ಭಾರತೀಯ ರಾಜಕಾರಣಿ. ಇವರು ಈ ಹಿಂದೆ ಜನತಾ ದಳಕ್ಕೆ ಸೇರಿದ್ದರು ಮತ್ತು ಈಗ ಜನತಾ ದಳ (ಜಾತ್ಯತೀತ)ಕ್ಕೆ ಸೇರಿದ್ದಾರೆ. ಅವರು ೧೧ ನೇ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಗುಜ್ರಾಲ್ ಐ.ಕೆ ಸಚಿವಾಲಯದಲ್ಲಿ ಯೋಜನೆ ಮತ್ತು ಅನುಷ್ಠಾನದ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.. == ಆರಂಭಿಕ ಜೀವನ == ಸವಣೂರು ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ೩ ಡಿಸೆಂಬರ್ ೧೯೫೦ ರಂದು ಜನಿಸಿದರು. ಇವರು ಶ್ರೀ ಗೋಪಾಲರಾವ್ ಮಾಸಾಜಿ ಪೋಲ್ ಅವರ ಪುತ್ರಿ. ಅವರು ಕೊಲ್ಲಾಪುರದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. == ವೃತ್ತಿ == ಸವಣೂರು ಅವರು ಈ ಹಿಂದೆ ಜನತಾದಳದ ಸದಸ್ಯರಾಗಿದ್ದರು. ೧೯೯೬ ರ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅವರು ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಚಿಕ್ಕೋಡಿ ಸ್ಥಾನದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ‌ಎನ್‌ಸಿ)ನ ಬಿ. ಶಂಕರಾನಂದ ರ ವಿರುದ್ಧ ಸ್ಪರ್ಧಿಸಿ ,ಅವರನ್ನು ೧,೧೨,೭೫೯ ಮತಗಳ ಅಂತರದಿಂದ ಸೋಲಿಸಿದರು. ಶಂಕರಾನಂದ ಅವರು ಈ ಮೊದಲು ಸತತ ಒಂಭತ್ತು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು. ಪ್ರಧಾನ ಮಂತ್ರಿ ಐ.ಕೆ. ಗುಜ್ರಾಲ್ ಅವರ ಮಂತ್ರಿಮಂಡಲದಲ್ಲಿ ಸವಣೂರ್ ಅವರನ್ನು ಯೋಜನೆ ಮತ್ತು ಅನುಷ್ಠಾನದ ರಾಜ್ಯ ಸಚಿವೆಯನ್ನಾಗಿ ನೇಮಿಸಲಾಯಿತು. ಆದರೆ, ೧೯೯೮ ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಳ ಚಿಕ್ಕೋಡಿಯಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಮಾರ್ಚ್ ೨೦೦೪ ರಲ್ಲಿ ಜನತಾ ದಳಕ್ಕೆ (ಜಾತ್ಯತೀತ) ಸೇರುವ ಮೊದಲು ಸವಣೂರು ಅವರು ಭಾರತೀಯ ರಾಷ್ಟೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ೨೦೦೮ ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು . == ವೈಯಕ್ತಿಕ ಜೀವನ == ಅವರು ಧಾರೇಶ್ವರ ಸವಣೂರು ಅವರನ್ನು ೧೨ ಮೇ ೧೯೭೪ ರಂದು ವಿವಾಹವಾದರು ಮತ್ತು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. == ಉಲ್ಲೇಖಗಳು ==